ಶುಕ್ರವಾರ, ಆಗಸ್ಟ್ 16, 2013



ಜಾತೀವಾರು ಸಮೀಕ್ಷೆ ಬಗ್ಗೆ ಇಂದಿನ ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ)  ಒಂದು ಬರಹ :
==============================================


ಪ್ರಿಯ ಮಡಿವಾಳ ಬಂಧುಗಳಿಗೆಲ್ಲ  ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.. 

ಇಂದಿನ  ವಿಜಯ  ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ) ಜಾತೀವಾರು ಸಮೀಕ್ಷೆ ಬಗ್ಗೆ ಒಂದು ಬರಹ ಇದೆ , ಓದಿ , ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳಿಗೆ    ಆಗಮಿಸುವ ' ಸಮೀಕ್ಷಕರಿಗೆ'  ನಿಮ್ಮ  ಪೂರ್ಣ ಕುಟುಂಬದ ಹಾಗೂ ನಿಮ್ಮ ಸಂಬಂಧಿಕರ -ಬಗ್ಗೆ ಪೂರ್ಣ ವಿವರ ನೀಡಿ , ಹಾಗೆಯೆ ಜಾತಿ ನಮೂದಿಸುವಾಗ ' ಹಿಂದೂ' ಮಡಿವಾಳರು ಎಂದೇ ನಮೂದಿಸಿ .

ಅಗಸ ,ದೋಬಿ ಎನ್ನುವುದು ವೃತ್ತಿ ಸೂಚಕವಾಗಿ ಮತ್ತು ಜಾತಿ ಸೂಚಕವಾಗಿದ್ದರೂ -ಈಗೀಗ ಅಗಸ -ದೋಬಿ ಎನ್ನುವದು ಹೀಯಾಳಿಸುವ -ರೀತಿಯಲ್ಲಿ ಉಪಯೋಗವಾಗುತಿದ್ದು ಕಾರಣ ತಾವೆಲ್ಲ 'ಹಿಂದೂ  ಮಡಿವಾಳರು' ಎಂದೇ ನಮೂದಿಸಿ ..

ಉತ್ತರ ಕರ್ನಾಟಕದ  ಕೆಲವು ಜಿಲ್ಲೆಗಳಲ್ಲಿ  ಹಲವು ಮಡಿವಾಳರು 'ಲಿಂಗಾಯತ ಮಡಿವಾಳ' ಎಂದು ಬರೆಸಿ 'ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ' ಕೊನೆಯಲ್ಲಿ ಸೇರ್ಪಡೆ ಆಗಿರುವ ಉದಾಹರಣೆ ಇದೆ . (೩ಬಿನಲ್ಲಿ).. ಆದ ಕಾರಣ ನಿರ್ಲಕ್ಷ್ಯ ಮಾಡದೆ ಅಲಕ್ಷ್ಯ ತೋರದೆ  'ಹಿಂದೂ ಮಡಿವಾಳ' ಎಂದೇ ಬರೆಯಿಸಿ .. ೨ಎ ಮೀಸಲಾತಿಗೆ ಒಳಪಡಿ.. .

ಪತ್ರಿಕಾ ವರಧಿ  ಲಿಂಕ್ :
http://bit.ly/14Pk6CX


ಶುಭವಾಗಲಿ

\।/


ಮಂಗಳವಾರ, ಆಗಸ್ಟ್ 13, 2013

ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ )
ಹರಿಹರ ಕ್ಷೇತ್ರ -ಕಾರ್ನಾಡು ಮೂಲ್ಕಿ -ಮಂಗಳೂರು (ದಕ್ಷಿಣ ಕನ್ನಡ)-
ವಜ್ರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿವಿಧ  ಕಾರ್ಯಕ್ರಮಗಳು
==========================================








ಸಂಘದ ಆರಂಭ-: ೧೯೫೨ -  ೨೦೧೩(1952-2013)

ವಿವರಗಳಿಗೆ ನೋಡಿ :

http://bit.ly/15yXuja

ಕರುನಾಡಿನ ಸಮಸ್ತ ಮಡಿವಾಳ ಬಂಧುಗಳು ಈ ಕಾರ್ಯಕ್ರಮಕ್ಕೆ ಶುಭ ಹಾರೈಸುವರು 


ಚಿತ್ರ ಸೌಜನ್ಯ :

ಶ್ರೀ ಸಂಜೀವ ಮಡಿವಾಳ -
ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ )

ಹರಿಹರ ಕ್ಷೇತ್ರ -ಕಾರ್ನಾಡು ಮೂಲ್ಕಿ -ಮಂಗಳೂರು (ದಕ್ಷಿಣ ಕನ್ನಡ)-

ಶ್ರೀ ರಜಕ ಯಾನೆ ಮಡಿವಾಳ  ಸಮಾಜ ಸೇವಾ ಸಂಘ (ರಿ ) -ಬ್ಲಾಗ್ ಅಡ್ರೆಸ್ಸು :

http://madivalasamaja.blogspot.in/2011/03/office-bearers-of-rajaka-yaane-madivala.html

ಬೆಂಗಳೂರಿನ ಟೌನ್ ಹಾಲ್ (ಪುರ ಭವನದಲ್ಲಿ )ನಲ್ಲಿ ೧೦-೦೮-೨೦೧೩ ರಂದು
 ನಡೆದ

'ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರಧಾನ ' ಮತ್ತು ಪ್ರತಿಭಾವಂತ ಮಡಿವಾಳ 

ವಿಧ್ಯಾರ್ಥಿಗಳ ಸನ್ಮಾನ 

ಸಮಾರಂಭದ ಫೋಟೋಗಳು
==============================================


ಚಿತ್ರಗಳಲ್ಲಿ ಇರುವವರು :











ಶ್ರೀಶ್ರೀಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು -ಚಿತ್ರದುರ್ಗ ಬಸವ ಮಾಚಿದೇವ ಸಂಸ್ಥಾನ ಮಠ 

ಶ್ರೀಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಕರಿಂಜೆ -ಮೂಡಬಿದ್ರಿ 


ಶ್ರೀಶ್ರೀಶ್ರೀ ಬಸವ ಮಾಚಿದೇವ ಯೋಗಾನಂದಪುರಿ ಸಾಮೀಜಿಗಳು -ನೆಲಮಂಗಲ 


ಹಾಗೂ ಶಾಸಕರಾದ 
ಎಂ . ಕೃಷ್ಣಪ್ಪ (ವಿಜಯನಗರ)
ಮಾಜಿ ಶಾಸಕ - ನೆ. ಲ ನರೇಂದ್ರ ಬಾಬು (ಮಹಾ ಲಕ್ಷ್ಮಿ ಲೇಔಟ್ )
ಮತ್ತಿತರರು -ಹಾಗೂ ಮಡಿವಾಳ ಸಮಾಜದ ಮುಖಂಡರು.. 






ಚಿತ್ರ ಸೌಜನ್ಯ : ಚಂದ್ರ ಶೇಖರ್ ಅಗಸರ್
( ಯಾದಗೀರ ಜಿಲ್ಲ ಮಡಿವಾಳ ಮುಖಂಡರು)