ಕರ್ನಾಟಕದಲ್ಲಿ ಮಡಿವಾಳರ ಸ್ತಿತಿ ಗತಿ ಹೇಗಿದೆ?
ಯಾಕೆ ?
ಪರಿಹಾರ ಏನು ?
ಓದಿ .. ಒಮ್ಮೆ ಯೋಚಿಸಿ -
ನಮ್ಮೊಡನೆ ಕೈ ಜೋಡಿಸಿ -
ಸಮುದಾಯಕ್ಕೆ ಕಿರು ಕಾಣಿಕೆ ಸಲ್ಲಿಸಿ
=======================================================
ಬಡತನ(ನಾ ನೋಡಿದ ಹಾಗೆ ಮತ್ತು ನಾನೇ ಸ್ವತಹ ಈ ಹಿಂದೆ ಒಮ್ಮೆ ಅನುಭವಿಸಿದ ಹಾಗೆ ), ಅನಕ್ಷರತೆ, ಸ್ವಂತ ಜಮೀನು ,ಮನೆ ಇಲ್ಲದಿರುವ ಅಸಂಖ್ಯಾತ ಮಡಿವಾಳರು ಈ ಕರುನಾಡಿನಲ್ಲಿ ಇರುವರು ಮತ್ತು ನನಗಿರುವ ಮಾಹಿತಿ ಪ್ರಕಾರ ಬಹುಪಾಲು ಬಡ ಮಡಿವಾಳರು ಉತ್ತರ ಕರ್ನಾಟಕದಲ್ಲಿಯೇ ಇರುವರು .
ನಮ್ಮ ಮಡಿವಾಳರಲ್ಲಿ ಎಸ್ಸೆಸೆಲ್ಸಿ ಮುಗಿಸೋರೆ ಜಾಸ್ತಿ ,ಇನ್ನುಲಿದವರಲ್ಲಿ ಕೆಲವರು ಮಾತ್ರ ಪೀ ಯೂ ಸಿ (ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್ ) ಮಿಕ್ಕಂತೆ ಡಿಗ್ರೀ ( ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್) ಓದುವರು ಅದೂ ನಮ್ ಕುಲ ಕಸುಬು ಮಾಡುತ್ತಾ :(((
ಬೇರೆಲ್ಲ ಜಾತಿಗಳ / ಸಮುದಾಯಗಳ ಜನ ಅವರಿಗೆ ಲಭಿಸಿದ - ಮೀಸಲಾತಿ /ಅಧಿಕಾರ / ಸಹಕಾರ ಕಾರಣವಾಗಿ ಅವರವರ ವೃತ್ತಿ ಬಿಟ್ಟು ಮುಖ್ಯವಾಹಿನಿಗೆ ಸೇರಿ ಅಭಿವೃದ್ಧಿ ಹೊಂದಿ ಉದ್ಧಾರವಾಗಿರುವರು ,ಆದರೆ ನಮ್ ಸ್ತಿತಿ ಗತಿ ಅಂದೂ ಇಂದೂ ಮುಂದೂ ಹೀಗೆಯೇ ಇರಬೇಕೆ?
ಮೀಸಲಾತಿ ಬೇಕೇ?
=============
ನಮಗೂ ಮೀಸಲಾತಿ ಪಡೆಯಲು ಹಕ್ಕಿದೆ , ಆ ಹಕ್ಕು ನಮ್ಮ ಮಡಿವಾಳರ ಬಡತನ , ಜೀವನ ಶೈಲಿ ,ಅನಕ್ಷರತೆ ಪ್ರಮಾಣ ಸರಿಯಾಗಿ ಸಂಶೋಧಿಸಿ ಅಧ್ಯಯನ ನಡೆಸಿ ಸರಕಾರಗಳಿಗೆ ಮನವರಿಕೆ ಮಾಡಿ ಕೊಡಬೇಕಿದೆ . ತನ್ಮೂಲಕ ಎಸ್ಸಿ ಎಸ್ಟಿಯಲ್ಲಿ ಸೇರಿ ಮುಂದೆ ಬರೋಣ .
ಮೀಸಲಾತಿ ಬೇಡ /ಸರಕಾರಗಳ ಹಂಗೂ ಬೇಡ ಎನ್ನುವಿರಾ?
==================================
ಸರ್ಕಾರಿ ಮುಲಾಜು ಮುತುವರ್ಜಿ/ ಹಂಗು ಬೇಡ ಎನ್ನುವುದಾದರೆ ಈಗಾಗ್ಲೇ ಸುಶಿಕ್ಷಿತರಾಗಿ ಮುಂದೆ ಬಂದಿರುವ ಸಿರಿವಂತ , ಕುಲ ಪ್ರಮುಖರು , ಹಿರಿಯ- ಕಿರಿಯ ಸರಕಾರೀ /ಖಾಸಗಿ ಕ್ಷೇತ್ರಗಳ ಅಧಿಕಾರಿಗಳು ( ಹಲವು ಜನ ಇರುವರು -ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುವರು :(() ) ಸಹಾಯ ಮಾಡಬೇಕು, ಸಹಾಯ ಮಾಡಲು ಹಲವು ಜನ ಈಗಲೂ ಸಿದ್ಧರಿರುವರು..
ಎಲ್ಲರೂ ತನು -ಮನ -ಧನ ಪೂರ್ವಕ ಸಹಾಯ ಮಾಡಿದರೆ ನಾವ್ ಏನು ಮಾಡಬೇಕು?
=================================================
>>ಮೊದಲಿಗೆ ಹಳ್ಳಿ ಹೋಬಳಿ ತಾಲೂಕು ಮಟ್ಟದಲ್ಲಿ ಮಡಿವಾಳರಿಗಾಗಿ (ಮಡಿವಾಳ ಹುಡುಗ -ಹುಡುಗಿಯರಿಗೆ)
ಪ್ರಾಥಮಿಕ /ಮಾಧ್ಯಮಿಕ / ಹೈಸ್ಕೂಲ್ / ಕಾಲೇಜು(ವಸತಿ ಸಹಿತ -ಹಾಸ್ಟೆಲ್) ಸ್ಥಾಪನೆ .
>>>>ಬಡ ವಿಧ್ಯಾರ್ಥಿಗಳ ಶಿಕ್ಷಣ /ಕ್ರೀಡೆಯ ಪೋಷಕತ್ವ /ಪ್ರಾಯೋಜಕತ್ವ
>>>>ಬಡ ವಿಧ್ಯಾರ್ಥಿಗಳಿಗೆ ಬಟ್ಟೆ ಬರೆ- ಪುಸ್ತಕ ಬ್ಯಾಗು - ಶಿಷ್ಯವೇತನ ವಿತರಣೆ
>>>ಕ್ರಮೇಣ ಕುಲ ಮೂಲ ವೃತ್ತಿಯನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯುವ ಹಾಗೆ ಮಾಡುವುದು .
ಹಾಗಾದ್ರೆ ಇನೇನು ಸಮಸ್ಯೆ? ಈ ಕೆಲಸ ಈಗಲೇ ಆರಂಭಿಸಬಹುದಲ್ಲ ಎನ್ನುವಿರಾ?
================================================
ಇಲ್ಲೇ ಸಮಸ್ಯೆ ಇರೋದು ... !!
>ಅದು ಪ್ರಾಮಾಣಿಕತೆ
>>ಸ್ವಚ್ಛತೆ
>>>ಪಾರದರ್ಶಕತೆ
>>>>ದಕ್ಷತೆ
>>>>>ನಾಯಕತ್ವ
>>>>>>ಸಹಕಾರಗಳ ಕೊರತೆ ಇದೆ ;((
ನಿಮಗೆ ಗೊತ್ತಿರುವ ಹಾಗೆ ಫೇಸ್ಬುಕ್ ಒಂದರಲ್ಲೇ ನಾ ನೋಡಿದ ಹಾಗೆ ಸುಮಾರು ೧೦ ಸಾವಿರಕ್ಕೂ ಹೆಹ್ಚು ಸುಶಿಕ್ಷಿತ ಮಡಿವಾಳರು ಇರುವರು , ಅವರೆಲ್ಲರನ್ನ ಸಂಪರ್ಕಿಸಿ ಈ ಸದುದ್ದೇಶವನ್ನು ಮನವರಿಕೆ ಮಾಡಿಕೊಡಬೇಕಿದೆ . ಅವರು ನೀಡುವ ಕೊಡುವ ತನು ಮನ ಧನ ಸಹಾಯ - ಸಲಹೆ - ಸಹಕಾರ 'ಅಪಾತ್ರ ಧಾನ ಆಗದು - ಎಂದು ಮನವರಿಕೆ ಮಾಡಿಕೊಡಬೇಕಿದೆ ಇದೆಲ್ಲದಕ್ಕೆ
ವಯುಕ್ತಿಕವಾಗಿ ನನ್ ಸಹಕಾರವಿದೆ .. ಸಾಮೂಹಿಕವಾಗಿ ನಮ್ಮೆಲ ಮಡಿವಾಳ ಬಂಧುಗಳ ಸಹಕಾರ ಸಿಗಬೇಕಾದರೆ ಫೇಸ್ಬುಕ್ನಲ್ಲಿರುವ ಸಕಲ ಸಾವಿರಾರು ಜನರನ್ನು ಸಂಪರ್ಕಿಸಿ ಅವರ ಸಂಪರ್ಕ ಸಂಖ್ಯೆ / ವಿಳಾಸ /ಉದ್ಯೋಗ ಮಾಹಿತಿ ತೆಗದುಕೊಂಡು ಎಲ್ಲರೂ ಒಂದೆಡೆ ಸೇರಿ ಸಭೆ ನಡೆಸಿ ಮಾರ್ಗಸೂಚಿ ರೂಪಿಸಿ ಕರುನಾಡಿನಾದ್ಯಂತ (ವಿಭಾಗವಾರು / ಜಿಲ್ಲಾ/ ತಾಲೂಕ /ಹೋಬಳಿ /ಹಳ್ಳಿ ಮಟ್ಟದಲ್ಲಿ )ಸಂಘಟನೆ ಮಾಡಬೇಕು ಆಮೇಲೆ ನಮ್ಮ ಹಕ್ಕಿಗಾಗಿ ಹೋರಾಟ .. ಸಹಾಯ ಮಾಡಲು ಈಗಲೂ ಹಲವು ಜನ ಮಡಿವಾಳ ಹಿರಿಯರು ,ಕುಲ ಪ್ರಮುಖರು ಹಿರಿಯ ಕಿರಿಯ ಸರಕಾರೀ- ಅರೆ ಸರಕಾರೀ ಖಾಸಗಿ ವಲಯಗಳ ಅಧಿಕಾರಿಗಳು ಸಿದ್ಧರಿರುವರು ..
ಮತ್ತೇನು ಕೊರತೆ ??
=============
ನಮ್ಮೆಲ್ಲ ಮಡಿವಾಳರನ್ನು ಒಗ್ಗೂಡಿಸಿ / ಸೇರಿಸಿ ಕಲೆಸಿ ಒಂದು ಸಂಘಟನೆ ಮಾಡಿ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಲು
> ಪ್ರಾಮಾಣಿಕತೆ
>>ಸ್ವಚ್ಛತೆ
>>>ಪಾರದರ್ಶಕತೆ
>>>>ದಕ್ಷತೆ
>>>>>ನಾಯಕತ್ವ
>>>>>>ಸಹಕಾರಗಳನ್ನು ಕೊಡುವ ಮಡಿವಾಳ ಜನರ ಕೊರತೆ ಇದೆ ;((
ನೀವ್ ಏನ್ ಹೇಳ್ತೀರಾ?
ನಿಮ್ಮ ಅಭಿಪ್ರಾಯ /ಅನಿಸಿಕೆ ಸಲಹೆಗೆ ಮುಕ್ತ ಆಹ್ವಾನ
ಕನ್ನಡದಲ್ಲಿ ಟೈಪ್ ಮಾಡಲು ಉಪಯೋಗಿಸಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ
http://on.fb.me/13GlKSV
venkatb೮೩@gmail.com
ಶುಭವಾಗಲಿ
ವೆಂಕಟೇಶ ಮಡಿವಾಳ ಬೆಂಗಳೂರು
\।/