ಶುಕ್ರವಾರ, ಜುಲೈ 12, 2013

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು   ಇಂದಿನ ಬಜೆಟ್ನಲ್ಲಿ ಹಿಂದುಳಿದ ವರ್ಗಗಳಿಗೆ ಘೋಷಿಸಿದ  ಅನುದಾನಗಳ ವಿವರ
==============================================


>>>* ಹಿಂದುಳಿದ ವರ್ಗಗಳಿಗೆ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ ಮಡಿವಾಳ, ಸವಿತಾ, ಹಡಪದ, ಕುಂಬಾರ, ಕಮ್ಮಾರ, ಗಾಣಿಗ, ತಿಗಳ, ಉಪ್ಪಾರ, ಗೌಳಿ ಜನಾಂಗಕ್ಕೆ ವಾರ್ಷಿಕ ಶೇ. 2ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯ.



>>>>>. * 2ಎ, 2ಬಿ, 3ಎ, 3ಬಿ, ಪ್ರವರ್ಗದ ವಿದ್ಯಾರ್ಥಿಗಳ ಆದಾಯ ಮಿತಿ ವಾರ್ಷಿಕ 1 ಲಕ್ಷಕ್ಕೆ ಹೆಚ್ಚಳ.
ಪ್ರವರ್ಗ-1ಕ್ಕೆ ಸೇರಿದ ವಿದ್ಯಾರ್ಥಿಗಳ ಆದಾಯ ಮಿತಿ 2.5 ಲಕ್ಷಕ್ಕೆ ಹೆಚ್ಚಳ

>>>>>>. * ಹಿಂದುಳಿದ ವರ್ಗಗಳ ಧಾರ್ಮಿಕ ಹಾಗೂ ಇತರೆ ಸಂಘ-ಸಂಸ್ಥೆಗಳಿಗೆ 75 ಕೋಟಿ ರು. ಅನುದಾನ ಹಾಗೂ ಹಿಂದುಳಿದ ವರ್ಗಗಳ ಖಾಸಗಿ ಹಾಸ್ಟೆಲ್ ನಿರ್ವಗಹಣೆಗೆ ಗರಿಷ್ಟ 5 ಲಕ್ಷ ರು. ಅನುದಾನ.

ಮೇಲಿನ  ಅನುದಾನದ ಸಧ್ಬಳಕೆ ಮತ್ತು ಉಪಯೋಗ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ . ನಮಮ್ ಸಮುದಾಯದವರು ಈ ಅನುದಾನವನ್ನು ಸಧ್ಬಳಕೆ ಮಾಡಿಕೊಳ್ಳಲಿ ..

ಶುಭವಾಗಲಿ

ಸುದ್ಧಿ ಸೌಜನ್ಯ : ದಟ್ಸ್ ಕನ್ನಡ
http://bit.ly/1b5Q6Us

ಬುಧವಾರ, ಜುಲೈ 10, 2013









ಕರ್ನಾಟಕ ರಾಜ್ಯ ಸರಕಾರದ  ಮತ್ತು ಕೇಂದ್ರ ಸರಕಾರದ  ಇತರ ಹಿಂದುಳಿದ ವರ್ಗಗಳಿಗಾಗಿನ (೧ಎ / ೨ಎ / ೩ಎ/೩ಬಿ )ಹಲವು ಸಾಲ ಸಹಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತ?
========================================================================

ಆ ಎಲ್ಲ  ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ  ಕ್ಲಿಕ್ ಮಾಡಿ . 








ಆ ವೆಬ್ಸೈಟ್ಗೆ ಹೋಗಿ  ಇಲ್ಲಿ  ಚಿತ್ರದಲ್ಲಿ  ತೋರಿಸಿರುವ  ಹಾಗೆ  ಕ್ಲಿಕ್ ಮಾಡಿ ವಿವರಗಳನ್ನು ನೋಡಿ . 
ಆಯಾಯ  ಜಿಲ್ಲ ತಾಲೂಕ  ಹಿಂದುಳಿದ ವರ್ಗಗಳ ಇಲಾಖೆ ಕಚೇರಿಗೆ ಹೋಗಿ  ಅರ್ಜಿ ಪಡೆದು ಸರಕಾರದ   ಸಹಾಯ ಪಡೆದುಕೊಳ್ಳಿ . 
ಇತರ ಹಿಂದುಳಿದ ವರ್ಗಗಳಲ್ಲಿ ಹಲವು ವರ್ಗಗಳು (ಹತ್ತು ಹಲವು ಉಪ ಜಾತಿಗಳು)ಬರುವುದರಿಂದ  ನಮ್ಮವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು .. 

ಶುಭವಾಗಲಿ 

ವೆಂಕಟೇಶ ಮಡಿವಾಳ ಬೆಂಗಳೂರು 

\।/


ಕರ್ನಾಟಕದಲ್ಲಿ ಮಡಿವಾಳರ ಸ್ತಿತಿ ಗತಿ ಹೇಗಿದೆ? 
ಯಾಕೆ ? 
ಪರಿಹಾರ ಏನು ? 
ಓದಿ .. ಒಮ್ಮೆ  ಯೋಚಿಸಿ -
ನಮ್ಮೊಡನೆ ಕೈ ಜೋಡಿಸಿ -
ಸಮುದಾಯಕ್ಕೆ ಕಿರು ಕಾಣಿಕೆ ಸಲ್ಲಿಸಿ 
=======================================================


ಬಡತನ(ನಾ ನೋಡಿದ ಹಾಗೆ ಮತ್ತು ನಾನೇ  ಸ್ವತಹ ಈ ಹಿಂದೆ ಒಮ್ಮೆ ಅನುಭವಿಸಿದ ಹಾಗೆ ), ಅನಕ್ಷರತೆ, ಸ್ವಂತ ಜಮೀನು ,ಮನೆ ಇಲ್ಲದಿರುವ  ಅಸಂಖ್ಯಾತ  ಮಡಿವಾಳರು ಈ ಕರುನಾಡಿನಲ್ಲಿ ಇರುವರು ಮತ್ತು ನನಗಿರುವ ಮಾಹಿತಿ ಪ್ರಕಾರ ಬಹುಪಾಲು ಬಡ ಮಡಿವಾಳರು ಉತ್ತರ ಕರ್ನಾಟಕದಲ್ಲಿಯೇ ಇರುವರು . 

ನಮ್ಮ ಮಡಿವಾಳರಲ್ಲಿ  ಎಸ್ಸೆಸೆಲ್ಸಿ  ಮುಗಿಸೋರೆ ಜಾಸ್ತಿ ,ಇನ್ನುಲಿದವರಲ್ಲಿ ಕೆಲವರು ಮಾತ್ರ ಪೀ ಯೂ ಸಿ (ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್ ) ಮಿಕ್ಕಂತೆ  ಡಿಗ್ರೀ ( ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್) ಓದುವರು ಅದೂ ನಮ್ ಕುಲ ಕಸುಬು ಮಾಡುತ್ತಾ :(((

ಬೇರೆಲ್ಲ ಜಾತಿಗಳ / ಸಮುದಾಯಗಳ ಜನ ಅವರಿಗೆ ಲಭಿಸಿದ - ಮೀಸಲಾತಿ /ಅಧಿಕಾರ / ಸಹಕಾರ ಕಾರಣವಾಗಿ  ಅವರವರ ವೃತ್ತಿ ಬಿಟ್ಟು ಮುಖ್ಯವಾಹಿನಿಗೆ ಸೇರಿ ಅಭಿವೃದ್ಧಿ ಹೊಂದಿ ಉದ್ಧಾರವಾಗಿರುವರು ,ಆದರೆ ನಮ್ ಸ್ತಿತಿ ಗತಿ  ಅಂದೂ ಇಂದೂ  ಮುಂದೂ ಹೀಗೆಯೇ ಇರಬೇಕೆ?

ಮೀಸಲಾತಿ ಬೇಕೇ?
=============
ನಮಗೂ ಮೀಸಲಾತಿ ಪಡೆಯಲು  ಹಕ್ಕಿದೆ , ಆ ಹಕ್ಕು  ನಮ್ಮ ಮಡಿವಾಳರ ಬಡತನ , ಜೀವನ ಶೈಲಿ ,ಅನಕ್ಷರತೆ ಪ್ರಮಾಣ  ಸರಿಯಾಗಿ ಸಂಶೋಧಿಸಿ ಅಧ್ಯಯನ ನಡೆಸಿ ಸರಕಾರಗಳಿಗೆ ಮನವರಿಕೆ ಮಾಡಿ ಕೊಡಬೇಕಿದೆ . ತನ್ಮೂಲಕ ಎಸ್ಸಿ ಎಸ್ಟಿಯಲ್ಲಿ  ಸೇರಿ ಮುಂದೆ ಬರೋಣ . 

ಮೀಸಲಾತಿ ಬೇಡ /ಸರಕಾರಗಳ ಹಂಗೂ ಬೇಡ ಎನ್ನುವಿರಾ?
==================================
ಸರ್ಕಾರಿ ಮುಲಾಜು ಮುತುವರ್ಜಿ/ ಹಂಗು ಬೇಡ  ಎನ್ನುವುದಾದರೆ  ಈಗಾಗ್ಲೇ ಸುಶಿಕ್ಷಿತರಾಗಿ ಮುಂದೆ ಬಂದಿರುವ ಸಿರಿವಂತ , ಕುಲ ಪ್ರಮುಖರು , ಹಿರಿಯ-  ಕಿರಿಯ ಸರಕಾರೀ /ಖಾಸಗಿ ಕ್ಷೇತ್ರಗಳ ಅಧಿಕಾರಿಗಳು ( ಹಲವು ಜನ ಇರುವರು -ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುವರು :(() )  ಸಹಾಯ ಮಾಡಬೇಕು, ಸಹಾಯ ಮಾಡಲು ಹಲವು ಜನ ಈಗಲೂ ಸಿದ್ಧರಿರುವರು.. 

ಎಲ್ಲರೂ ತನು -ಮನ -ಧನ ಪೂರ್ವಕ ಸಹಾಯ ಮಾಡಿದರೆ ನಾವ್ ಏನು ಮಾಡಬೇಕು?
=================================================
>>ಮೊದಲಿಗೆ ಹಳ್ಳಿ ಹೋಬಳಿ ತಾಲೂಕು ಮಟ್ಟದಲ್ಲಿ ಮಡಿವಾಳರಿಗಾಗಿ (ಮಡಿವಾಳ ಹುಡುಗ -ಹುಡುಗಿಯರಿಗೆ)
ಪ್ರಾಥಮಿಕ /ಮಾಧ್ಯಮಿಕ / ಹೈಸ್ಕೂಲ್ / ಕಾಲೇಜು(ವಸತಿ ಸಹಿತ -ಹಾಸ್ಟೆಲ್) ಸ್ಥಾಪನೆ . 
>>>>ಬಡ ವಿಧ್ಯಾರ್ಥಿಗಳ ಶಿಕ್ಷಣ /ಕ್ರೀಡೆಯ ಪೋಷಕತ್ವ /ಪ್ರಾಯೋಜಕತ್ವ 
>>>>ಬಡ ವಿಧ್ಯಾರ್ಥಿಗಳಿಗೆ  ಬಟ್ಟೆ ಬರೆ- ಪುಸ್ತಕ  ಬ್ಯಾಗು - ಶಿಷ್ಯವೇತನ ವಿತರಣೆ 
>>>ಕ್ರಮೇಣ ಕುಲ ಮೂಲ ವೃತ್ತಿಯನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯುವ ಹಾಗೆ ಮಾಡುವುದು . 

ಹಾಗಾದ್ರೆ ಇನೇನು ಸಮಸ್ಯೆ? ಈ  ಕೆಲಸ ಈಗಲೇ  ಆರಂಭಿಸಬಹುದಲ್ಲ ಎನ್ನುವಿರಾ?
================================================

ಇಲ್ಲೇ ಸಮಸ್ಯೆ ಇರೋದು ... !!
>ಅದು ಪ್ರಾಮಾಣಿಕತೆ 
>>ಸ್ವಚ್ಛತೆ 
>>>ಪಾರದರ್ಶಕತೆ 
>>>>ದಕ್ಷತೆ 
>>>>>ನಾಯಕತ್ವ 
>>>>>>ಸಹಕಾರಗಳ ಕೊರತೆ  ಇದೆ  ;((
ನಿಮಗೆ ಗೊತ್ತಿರುವ ಹಾಗೆ  ಫೇಸ್ಬುಕ್ ಒಂದರಲ್ಲೇ ನಾ ನೋಡಿದ ಹಾಗೆ ಸುಮಾರು ೧೦ ಸಾವಿರಕ್ಕೂ ಹೆಹ್ಚು ಸುಶಿಕ್ಷಿತ ಮಡಿವಾಳರು ಇರುವರು , ಅವರೆಲ್ಲರನ್ನ ಸಂಪರ್ಕಿಸಿ ಈ ಸದುದ್ದೇಶವನ್ನು ಮನವರಿಕೆ ಮಾಡಿಕೊಡಬೇಕಿದೆ . ಅವರು ನೀಡುವ ಕೊಡುವ ತನು ಮನ ಧನ  ಸಹಾಯ - ಸಲಹೆ - ಸಹಕಾರ 'ಅಪಾತ್ರ ಧಾನ ಆಗದು - ಎಂದು ಮನವರಿಕೆ ಮಾಡಿಕೊಡಬೇಕಿದೆ   ಇದೆಲ್ಲದಕ್ಕೆ 
ವಯುಕ್ತಿಕವಾಗಿ ನನ್ ಸಹಕಾರವಿದೆ .. ಸಾಮೂಹಿಕವಾಗಿ ನಮ್ಮೆಲ ಮಡಿವಾಳ ಬಂಧುಗಳ ಸಹಕಾರ ಸಿಗಬೇಕಾದರೆ ಫೇಸ್ಬುಕ್ನಲ್ಲಿರುವ ಸಕಲ ಸಾವಿರಾರು ಜನರನ್ನು ಸಂಪರ್ಕಿಸಿ ಅವರ ಸಂಪರ್ಕ  ಸಂಖ್ಯೆ / ವಿಳಾಸ /ಉದ್ಯೋಗ ಮಾಹಿತಿ  ತೆಗದುಕೊಂಡು ಎಲ್ಲರೂ ಒಂದೆಡೆ ಸೇರಿ ಸಭೆ ನಡೆಸಿ ಮಾರ್ಗಸೂಚಿ  ರೂಪಿಸಿ ಕರುನಾಡಿನಾದ್ಯಂತ (ವಿಭಾಗವಾರು / ಜಿಲ್ಲಾ/ ತಾಲೂಕ /ಹೋಬಳಿ /ಹಳ್ಳಿ ಮಟ್ಟದಲ್ಲಿ  )ಸಂಘಟನೆ ಮಾಡಬೇಕು  ಆಮೇಲೆ ನಮ್ಮ ಹಕ್ಕಿಗಾಗಿ  ಹೋರಾಟ .. ಸಹಾಯ ಮಾಡಲು ಈಗಲೂ  ಹಲವು ಜನ  ಮಡಿವಾಳ ಹಿರಿಯರು ,ಕುಲ ಪ್ರಮುಖರು ಹಿರಿಯ ಕಿರಿಯ  ಸರಕಾರೀ- ಅರೆ ಸರಕಾರೀ ಖಾಸಗಿ  ವಲಯಗಳ   ಅಧಿಕಾರಿಗಳು  ಸಿದ್ಧರಿರುವರು .. 

ಮತ್ತೇನು ಕೊರತೆ ??
=============
ನಮ್ಮೆಲ್ಲ ಮಡಿವಾಳರನ್ನು  ಒಗ್ಗೂಡಿಸಿ / ಸೇರಿಸಿ ಕಲೆಸಿ  ಒಂದು ಸಂಘಟನೆ ಮಾಡಿ  ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಲು 
>  ಪ್ರಾಮಾಣಿಕತೆ 
>>ಸ್ವಚ್ಛತೆ 
>>>ಪಾರದರ್ಶಕತೆ 
>>>>ದಕ್ಷತೆ 
>>>>>ನಾಯಕತ್ವ 
>>>>>>ಸಹಕಾರಗಳನ್ನು ಕೊಡುವ  ಮಡಿವಾಳ ಜನರ   ಕೊರತೆ  ಇದೆ  ;((

ನೀವ್ ಏನ್ ಹೇಳ್ತೀರಾ?
ನಿಮ್ಮ ಅಭಿಪ್ರಾಯ /ಅನಿಸಿಕೆ ಸಲಹೆಗೆ  ಮುಕ್ತ ಆಹ್ವಾನ 
ಕನ್ನಡದಲ್ಲಿ ಟೈಪ್ ಮಾಡಲು ಉಪಯೋಗಿಸಿ 

ನಮ್ಮನ್ನು ಇಲ್ಲಿ ಸಂಪರ್ಕಿಸಿ 
http://on.fb.me/13GlKSV
venkatb೮೩@gmail.com 

ಶುಭವಾಗಲಿ 

ವೆಂಕಟೇಶ ಮಡಿವಾಳ ಬೆಂಗಳೂರು 

\।/


ಸೋಮವಾರ, ಜುಲೈ 8, 2013






(ನಮ್ ಜಾತಿ ಅಂದಾಜು -ಇಡೀ ಕರುನಾಡಿನಲ್ಲಿ 

೧೦ - ೧೫ ಲಕ್ಷ ಇರಬಹುದು ... )
==============================================


ಜಾತೀವಾರು ಜನ ಗಣತಿ ಮಾಡುವ ಬಗ್ಗೆ ವಿವಿಧ ರಾಜಕೀಯ ನಾಯಕರು , 

ಹಲವು ಮಠಗಳ ಸ್ವಾಮೀಜಿಗಳು , ಮತ್ತು ಕೆಲ ಸಮುದಾಯಗಳ 

ಮುಖಂಡರುಗಳು ಆಗಾಗ ಹೇಳಿಕೆ ಕೊಡುವರು - ಒತ್ತಾಯಿಸುವರು ,

 ಆದ್ರೆ ಜಾತಿ ಹೆಸರಲ್ಲಿ ಸಮೀಕ್ಷೆ ಮಾಡುವುದು ಜಾತ್ಯಾತೀತ ರಾಷ್ಟ್ರವಾದ ನಮಗೆ ತಕ್ಕುದಲ್ಲ ಎನ್ನುವ ವಾದವೂ ಇದೆ , ಆದರೂ ಈಗ ಸರಕಾರಗಳು ಕೊಡುವ ಜಾತೀವಾರು ಅಂದಾಜು ಅಂಕೆ ಶಂಕೆಗೆ ಕಾರಣವಾಗಿದೆ ..


 ಹೀಗಾಗಿ ಈ ಜಾತೀವಾರು ಸಮೀಕ್ಷೆ ನಡೆಸೋದೆ ಒಳ್ಳೆಯದು ಎನ್ನುವ ಅಭಿಪ್ರಾಯವೂ ಇದೆ , ತನ್ಮೂಲಕ ನೈಜ ಅಂಕಿ ಅಂಶ ಬಹಿರಂಗವಾಗಲಿದೆ ಹಾಗೆಯೇ ಆಯಾಯ ಜಾತಿಗಳ ಅಭಿವೃದ್ಧಿ ಬಗ್ಗೆ ತಿಳಿಯಲು ಸಹಾಯಕವಾಗಲಿದೆ ಎಂಬ ಅಂಶವೂ ಇದೆ ,

 ಆದರೆ ಇದು ಮುಂದೊಮ್ಮೆ ಜಾತಿ ರಾಜಕೀಯಕ್ಕೆ 

(ಅದು ಈಗಲೇ ಶುರು ಆಗಿದೆ )ಎಡೆ ಮಾಡಿಕೊಡದಿರಲಿ...

ಈ ಜಾತೀವಾರು ಸಮೀಕ್ಷೆ ಬಗ್ಗೆ ನೀವ್ ಏನು ಹೇಳುತ್ತೀರಾ ?



ಈ ಬಗ್ಗೆ ವಿಜಯವಾಣಿಯಲ್ಲಿ ಬಂದ ವರಧಿ ನೋಡಿ 
http://bit.ly/16iCn5U
ಚಿತ್ರ ಬರಹ ಸೌಜನ್ಯ : ವಿಜಯವಾಣಿ
ದಿನಾಂಕ :
೦೮/೦೭/೨೦೧೩ 
ಸೋಮವಾರ