(ನಮ್ ಜಾತಿ ಅಂದಾಜು -ಇಡೀ ಕರುನಾಡಿನಲ್ಲಿ
೧೦ - ೧೫ ಲಕ್ಷ ಇರಬಹುದು ... )
==============================================
ಜಾತೀವಾರು ಜನ ಗಣತಿ ಮಾಡುವ ಬಗ್ಗೆ ವಿವಿಧ ರಾಜಕೀಯ ನಾಯಕರು ,
ಹಲವು ಮಠಗಳ ಸ್ವಾಮೀಜಿಗಳು , ಮತ್ತು ಕೆಲ ಸಮುದಾಯಗಳ
ಮುಖಂಡರುಗಳು ಆಗಾಗ ಹೇಳಿಕೆ ಕೊಡುವರು - ಒತ್ತಾಯಿಸುವರು ,
ಆದ್ರೆ ಜಾತಿ ಹೆಸರಲ್ಲಿ ಸಮೀಕ್ಷೆ ಮಾಡುವುದು ಜಾತ್ಯಾತೀತ ರಾಷ್ಟ್ರವಾದ ನಮಗೆ ತಕ್ಕುದಲ್ಲ ಎನ್ನುವ ವಾದವೂ ಇದೆ , ಆದರೂ ಈಗ ಸರಕಾರಗಳು ಕೊಡುವ ಜಾತೀವಾರು ಅಂದಾಜು ಅಂಕೆ ಶಂಕೆಗೆ ಕಾರಣವಾಗಿದೆ ..
ಹೀಗಾಗಿ ಈ ಜಾತೀವಾರು ಸಮೀಕ್ಷೆ ನಡೆಸೋದೆ ಒಳ್ಳೆಯದು ಎನ್ನುವ ಅಭಿಪ್ರಾಯವೂ ಇದೆ , ತನ್ಮೂಲಕ ನೈಜ ಅಂಕಿ ಅಂಶ ಬಹಿರಂಗವಾಗಲಿದೆ ಹಾಗೆಯೇ ಆಯಾಯ ಜಾತಿಗಳ ಅಭಿವೃದ್ಧಿ ಬಗ್ಗೆ ತಿಳಿಯಲು ಸಹಾಯಕವಾಗಲಿದೆ ಎಂಬ ಅಂಶವೂ ಇದೆ ,
ಆದರೆ ಇದು ಮುಂದೊಮ್ಮೆ ಜಾತಿ ರಾಜಕೀಯಕ್ಕೆ
(ಅದು ಈಗಲೇ ಶುರು ಆಗಿದೆ )ಎಡೆ ಮಾಡಿಕೊಡದಿರಲಿ...
ಈ ಜಾತೀವಾರು ಸಮೀಕ್ಷೆ ಬಗ್ಗೆ ನೀವ್ ಏನು ಹೇಳುತ್ತೀರಾ ?
ಈ ಬಗ್ಗೆ ವಿಜಯವಾಣಿಯಲ್ಲಿ ಬಂದ ವರಧಿ ನೋಡಿ
http://bit.ly/16iCn5U
ಚಿತ್ರ ಬರಹ ಸೌಜನ್ಯ : ವಿಜಯವಾಣಿ
ದಿನಾಂಕ :
೦೮/೦೭/೨೦೧೩
ಸೋಮವಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ